ಈ ವಾರ ಬಿಡುಗಡೆ ?ಸೀ...ಯು.... ನೋಡಲು ಬನ್ನಿ
Posted date: 18 Sun, Nov 2012 ? 05:56:27 PM
‘ಸೀ...ಯು... ಎಂಬ ಶೀರ್ಷಿಕೆ ಇಟ್ಟುಕೊಂಡು ನೀವು ನಾವು ಸಿನೆಮಾ ನೋಡದಿದ್ದರೆ ಹ್ಯಾಗೆ ಅಂತ ಪ್ರೀತಿಯಿಂದ ಕೇಳುತ್ತಿದೆ ಚಿತ್ರ ತಂಡ.  ಬನ್ನಿ ಮತ್ತೆ ಈ ವಾರ ‘ಸೀ...ಯು...; ನೋಡಲು ಎಂದು ಪ್ರಥಮ ಚಿತ್ರ ನಿರ್ಮಿಸಿರುವ ನಿರ್ಮಾಪಕ ನಾಗೇಂದ್ರ ರಾವು ಅವರು ಕರೆಯುತ್ತಿದ್ದಾರೆ ಕರ್ನಾಟಕದ ಸಮಸ್ತ ಸಿನೆಮಾ ನೋಡುಗರನ್ನು. 

‘ಸೀ ...ಯು... ಕನ್ನಡ ಸಿನೆಮ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಪತ್ರ ನೀಡಿರುವ ಚಿತ್ರ. ನೇತ್ರದಾನ ಮಹಾದಾನ ಎಂಬ ಜನಪ್ರಿಯ ಮಾತು ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಹೇಳಿರುವುದನ್ನು ಚಿತ್ರಕ್ಕೆ ಅಳವಡಿಸಿ ನಿರ್ಮಾಪಕರು ಕಥೆ ವ್ಯಾಪಾರಿ ಚಿತ್ರಕ್ಕೆ ಮಾಡಿಸಿರುವರು. 

ಹೊಸ ಜೋಡಿ ವೈಭವ್ ಹಾಗೂ ಅರ್ಪಣ ಅಭಿನಯದ ‘ಸೀ...ಯು...ಒಂದು ಒಳ್ಳೆಯ ಉದ್ದೇಶ, ಸಂದೇಶ ಮನರಂಜನೆ ಸಹ ಇಟ್ಟುಕೊಂಡಿರುವ ಚಿತ್ರ ದುರ್ಗ ಪ್ರಸಾದ್ ಅವರ ನಿರ್ದೇಶನದ ಚೊಚ್ಚಲ ಸಿನೆಮಾ. ನಿರ್ದೇಶಕರು ಇಂದಿನ ಪೀಳಿಗೆಗೆ ಬೇಕಾದ ವಿಚಾರದ ಜೊತೆಯಲ್ಲೇ ಮನಸ್ಸು ತಟ್ಟುವ ಕ್ಲೈಮಾಕ್ಸ್ ಅನ್ನು ಮಾಡಿರುವರು. ನಾಯಕ ವೈಭವ್ ‘ಸೀ...ಯು...ಎಂದು ಅಂತ್ಯದಲ್ಲಿ ಹೇಳುವ ವಿಚಾರ ಎಲ್ಲರ ಹೃದಯ, ಮನಸ್ಸುಗಳಿವೆ ಹತ್ತಿರವಾಗುವುದು ಗ್ಯಾರಂಟೀ ಅಂತಾರೆ ನಿರ್ದೇಶಕರು.

ಹಿರಿಯ ಸಿನೆಮಾ ಪ್ರಚಾರಕರ್ತ ರಾಮಕೃಷ್ಣ ಅವರ ಸುಪುತ್ರ ವೈಭವ್ ಈ ಚಿತ್ರದಿಂದ ನಾಯಕನ ಪಟ್ಟವನ್ನು ಅಲಂಕರಿಸಿದ್ದಾರೆ. ಸಾಹಸ ಪ್ರವೃತಿಯನ್ನು ಇಷ್ಟಪಡುವ ಅರ್ಪಣ ಪ್ರಭು ಈ ಚಿತ್ರದ ನಾಯಕಿ. 3 ಕನ್ನಡ ಸಿನೆಮಗಳಲ್ಲಿ ಕಾಣಿಸಿಕೊಡಿದ್ದವರು. ಇವರಿಗೆ ಇದು ಪೂರ್ಣ ಪ್ರಮಾಣದ ನಾಯಕಿ ಚಿತ್ರ. 

ಮಧುರ ಅವರ ಸಂಗೀತ ನಾಲ್ಕು ಹಾಡುಗಳಿಗೆ ನೀಡಿದ್ದಾರೆ. ರಾಜು ಅವರ ಛಾಯಾಗ್ರಹಣ, ತಾಯಿಯಾಗಿ ಜಯಲಕ್ಷ್ಮಿ ಅಭಿನಯಿಸಿದ್ದಾರೆ. ಸತ್ಯಜಿತ್, ಬೀರದಾರ್ ಹಾಗೂ ಕೆಲವು ಹೊಸ ಪ್ರತಿಭೆಗಳು ಶ್ರೀ ಸಾಯಿ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ‘ಸೀ...ಯು...’ಚಿತ್ರದಲ್ಲಿ ಇದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed